Tuesday, May 08, 2007

ನನ್ನ ಇನಿಯನ ನೆಲೆಯ

ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ. ಹೆಸರು ಕೇಳದವರೇ ವಿರಳ. ಅದರಲ್ಲೂ ಭಾವಗೀತೆಗಳನ್ನು ಆಸ್ವಾದಿಸುವವರಂತೂ ಇವರನ್ನು ಮರೆಯಲೇ ಸಾದ್ಯವಿಲ್ಲ.
ಇವರ ಒಂದು ಕವಿತೆ. ನನ್ನ ಅತೀ ಪ್ರೀಯವಾದ ಹಾಡುಗಳಲ್ಲಿ ಒಂದು. ಇಲ್ಲಿ ಪ್ರಕಟಿಸುತ್ತಿದ್ದೇನೆ.

ಸಂಗೀತ : ಸಿ. ಅಶ್ವಥ್
ಗಾಯನ : ಸಂಗೀತ ಕಟ್ಟಿ


ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿದ್ದು ತೆನೆಯೆದ್ದು ತೂಗುವವನು ||೨||
ನಲ್ಲೆ ಅಳಲನು ಏಕೆ ತಿಳಿಯನವನು


ಈ ಹಾಡನ್ನು ಇಲ್ಲಿ ಕೇಳಬಹುದು.

2 Comments:

Blogger ಸುಧೀಂದ್ರ ಹೇಳಿದ್ದು..

ಬಹುಶಃ ಇದು ರತ್ನಮಾಲ ಪ್ರಕಾಶ್ ಹೇಳಿದ್ದು ಅಂತ ಅನಿಸ್ತು.... ಅಲ್ದಾ??

July 02, 2008 4:13 PM  
Blogger Unknown ಹೇಳಿದ್ದು..

why did you stop blogging? they were good, keep going.

April 16, 2010 4:32 PM  

Post a Comment

<< Home